Sunday 3 June 2012

ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ


ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ 1940ರ ದಶಕದಲ್ಲಿ ದಕ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿ, ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುವ ಮೂಲಕ ದಕ ಜಿಲ್ಲೆಯಲ್ಲೂ, ಕರ್ನಾಟಕದ ಹಲವೆಡೆಗಳ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್   ಗಳನ್ನು ಪ್ರಬಲವಾಗಿ ಬೆಳೆಸಿದ ಶ್ರೇಯ ಕಕ್ಕಿಲ್ಲಾಯರಿಗೂ, ಅವರ ಸಂಗಾತಿಗಳಿಗೂ ಸೇರುತ್ತದೆ.

ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿಯೂ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಕ್ಕಿಲ್ಲಾಯರು ಅದಕ್ಕಾಗಿ ಸೆರೆವಾಸವನ್ನೂ ಅನುಭವಿಸಿದ್ದರು.

ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು.

ಮೊತ್ತ ಮೊದಲ ರಾಜ್ಯಸಭೆಗೆ 1952-1954ರವರೆಗೆ ಮದ್ರಾಸ್ ಅಸೆಂಬ್ಲಿಯಿಂದ ಆಯ್ಕೆಗೊಂಡಿದ್ದ ಕಕ್ಕಿಲ್ಲಾಯರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕಕ್ಕಿಲ್ಲಾಯರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ 1972 ಹಾಗೂ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದ ಕಕ್ಕಿಲ್ಲಾಯರು ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ  ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು.

ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
See bvkakkilaya.in | ನೋಡಿ bvkakkilaya.in

ಜೂನ್ 16, ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕಕ್ಕಿಲ್ಲಾಯ ಸ್ಮರಣ ಸಭೆಯನ್ನು ಆಯೋಜಿಸಲಾಗಿತ್ತು. ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕಾಂ. ಸುಧಾಕರ ರೆಡ್ಡಿ, ಚಿಂತಕ ಡಾ. ಜಿ. ರಾಮಕೃಷ್ಣ, ನಿವೃತ್ತ ನ್ಯಾಯಾಧೀಶರಾದ ಕೋ. ಚೆನ್ನಬಸಪ್ಪ, ಮಾಜಿ ಸಚಿವ ಬಿ ಎ ಮೊಹಿದ್ದೀನ್, ಸಿಪಿಎಂ ನಾಯಕರಾದ ಜಿ ಎನ್ ನಾಗರಾಜ್, ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಸ್ ರಾಜಾರಾಂ, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರುಗಳು ಕಕ್ಕಿಲ್ಲಾಯರು ಮತ್ತವರ ಜೀವನ-ದಸಾಧನೆಗಳ ಬಗೆ ಮಾತನಾಡಿ ನುಡಿನಮನಗಳನ್ನು ಸಲ್ಲಿಸಿದರು.  ಭಾರತ  ಕಮ್ಯೂನಿಸ್ಟ್ ಪಕ್ಷದ  ರಾಜ್ಯ ಮಂಡಲಿಯ ಪ್ರಧಾನ ಕಾರ್ಯದರ್ಶಃಇಗಳಾದ ಪಿ ವಿ ಲೋಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ವರದಿಗಳು: ಪ್ರಜಾವಾಣಿ | The Hindu


ಬಿ ವಿ ಕಕ್ಕಿಲ್ಲಾಯರ ಸ್ಫೂರ್ತಿಯಿಂದ ಶಾಲಾ ಮಕ್ಕಳಿಗೆ ಚೀಲ | Inspired by BV Kakkilaya, school bags for kids [Deccan Herald | Times of Inida | Mangalorean.com | Mangalore Today
  • ಜೂನ್ 9 ರ ಉದಯವಾಣಿಯಲ್ಲಿ ನಾರಾಯಣ ಎ ಬರೆದ ಅಂಕಣ ಕಾಲಕಾರಣ: ಬರೆಯದ ದಿನಚರಿಯ ಕೊನೆಯ ಪುಟ ಮುಗಿಸಿದ ಬಿ.ವಿ. ಕಕ್ಕಿಲ್ಲಾಯ: ಎಲ್ಲ ತತ್ವದೆಲ್ಲೆ ಮೀರಿದ ರಾಜಕಾರಣಿ [ನೋಡಿ (ಪುಟ 6), ನೋಡಿ]
  • ತೀರದ ಕಕ್ಕುಲತೆಯ ಕಣಜ ಕಕ್ಕಿಲ್ಲಾಯ! ಹಲೀಮತ್ ಸಾದಿಯಾ, ಕನ್ನಡಪ್ರಭ, ಜೂನ್ 10, 2012 [ನೋಡಿ ಪುಟ 16 | ನೋಡಿ]
  • ಕಳಚಿದ ಕೆಂಪುನಕ್ಷತ್ರ ಬಿ.ವಿ.ಕಕ್ಕಿಲ್ಲಾಯ - ಬಾಲಕೃಷ್ಣ ಪುತ್ತಿಗೆ ಪ್ರಜಾವಾಣಿ ಜೂನ್ 10, 2012 [ನೋಡಿ]
  • ಸಮತಾ ಸಮಾಜದ ಕನಸುಗಾರವಾರ್ತಾಭಾರತಿ ಜೂನ್ 10, 2012 [ನೋಡಿ]
  • ಜನನಾಯಕನೊಬ್ಬನ ನಿರ್ಗಮನ - ಸನತ್ ಕುಮರ್ ಬೆಳಗಲಿ - ವಾರ್ತಾಭಾರತಿ ಜೂನ್ 11, 2012 [ನೋಡಿ]
  • ಅಗಲಿದ ಕಾಮ್ರೆಡ್‌ಗೆ ವಿದಾಯ-ಒಂದು ವಾಗ್ವಾದದೊಂದಿಗೆ : ಜೆ ರಾಜಶೇಖರ್ - ವಾರ್ತಾಭಾರತಿ ಮಂಗಳವಾರ - ಜೂನ್ -19-2012 [ನೋಡಿ]
ಪತ್ರಿಕಾ ವರದಿಗಳು:

1 comment:

  1. bi.vi.kakkillayara nidhanada suddiyannu illi Germanyalli iiga internet nalli odi bahala dukha aayotu.atyanta paamaanilka,tatvanishta,horaatagaara ,badukina koneya varege mowlyagalannu kaapaadikondu banda chintaka Kakkillaayara nidhana ondu apoorva yugada koneyende kaanuttade.avara nidhanakke nanna kambani mattu gowravada shraddhaanjali.

    ReplyDelete